ಗುಂಡ ತುಂಬ ಸಾಧು ಹುಡುಗ
ಹಸುವಿನಂತೆ ಸದಾ
ಒಳ್ಳೇ ಮಾತು ಆಡಿದೋರ್ಗೆ ಸಾಕಿದ್ನಾಯಿ ಥರಾ!
ಸ್ಕೂಲು ಚೀಲ ಭಾರ ಅಂದ್ರೆ
ತಾನೇ ಅದನ್ನ ತರ್ತಾನೆ!
ಸುಸ್ತು ಅಂದ್ರೆ ಹೆಗಲ ಮೇಲೆ ಹೊತ್ತು ತಂದು ಬಿಡ್ತಾನೆ!
ಭಾರೀ ಡಬ್ಬಿ ತುಂಬ ತಂದ
ತನ್ನ ತಿಂಡಿ ತೆಗೆದು
ತಿನ್ರೊ ಅಂತ ಬೊಗಸೆ ಬೊಗಸೆ ಕೊಟ್ಬಿಡ್ತಾನೆ ಕರೆದು
ಆದ್ರೆ ಜೋಕೆ, ತಿಳ್ಕೊಂಡಿರು-
ಗುಂಡ ದಡ್ಡ ಅಂತ
ಹೇಳ್ದಿ ಅಂದ್ರೆ ಕೈಕಾಲೆರಡೂ ಮುರಿದೇ ಹೋಯ್ತು ಅಂತ
ತಾನುಶುದ್ಧ ಪೆದ್ದ ಅಂತ
ಗುಂಡಂಗೂನು ಗೊತ್ತು,
ನಾವು ಹಾಗೆ ಹೇಳಿದ್ವೇಂದ್ರೆ ತಡೀಲಾರದ್ ಸಿಟ್ಟು!
ಇರ್ಲಿ ಬಿಡೋ ದಡ್ಡ ಆದ್ರೂ
ಎಷ್ಟೊಂದ್ ಒಳ್ಳೇವ್ನಾಲ್ವಾ?
ಒಳ್ಳೇ ನಡತೆ ಬುದ್ಧಿಗಿಂತ ದೊಡ್ದು ಅಂತಾರಲ್ವ?
*****
Related Post
ಸಣ್ಣ ಕತೆ
-
ಕ್ಷಮೆ
ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…
-
ವರ್ಗಿನೋರು
ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…
-
ಗ್ರಹಕಥಾ
[ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…
-
ಕೇರೀಜಂ…
ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…
-
ಉಪ್ಪು
ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…